ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್

ಸರ್ಕಾರಿ ಸೇವಾ ಕೇಂದ್ರ

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು / Mookajji's dreams are dr. Sivarama Karanth

 ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು / Mookajji's dreams are dr. Sivarama Karanth

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು / Mookajji's dreams are dr. Sivarama Karanth

ಚಿತ್ರ ಕೃಪೆ: -pustakapremi.wordpress.com

 

 

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು / Mookajji's dreams are dr. Sivarama Karanth

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು ರಚಿಸಿರುವ ಒಂದು ಕಾದಂಬರಿ. ಈ ಕಾದಂಬರಿಗೆ ೧೯೭೭ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.[೧] ಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯೋ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮೊಮ್ಮಗನ ಪ್ರಶ್ನೆಗಳಿಗೆ ಅಜ್ಜಿ ತನ್ನ ಅನಿಸಿಕೆಗಳನ್ನು ಹೇಳುತ್ತಾ ಇಂದಿನ ಜಮಾನದ ಜನತೆಗೆ ಇರುವ ಹಲವು ಬಗೆಯ ಗೊಂದಲಗಳನ್ನು ಬಿಡಿಸಿ ತಿಳಿಸಿದ್ದಾರೆ.ಈ ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಒಂದು ಅಚ್ಚರಿಯಾದ ಶಕ್ತಿ ಇರುತ್ತದೆ.ಅದೇನೆಂದರೆ,ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುತ್ತವೆ.ಅಂದರೆ ಇವು ನಿದ್ದೆಯಲ್ಲಿ ಬರೋ ಕನಸುಗಳು ಅಲ್ಲ.ಎಚ್ಚರವಿದ್ದಾಗ ಬರುವ ಕನಸುಗಳು. ಈ ಕಾದಂಬರಿಯ ಕಥಾನಾಯಕಿ, ಮೂಕಜ್ಜಿ, ತನ್ನ ಕನಸುಗಳ ಬಗ್ಗೆ ಅವಳ ಮೊಮ್ಮಗನ ಹತ್ತಿರ ಹೇಳಿಕೊಳ್ಳುತ್ತಾಳೆ. ಈ ಕನಸುಗಳು ಮನುಷ್ಯನ ಸಾಮಾಜಿಕ ಬೆಳವಣಿಗೆಗಳು ಮತ್ತು ದೇವರ ಸ್ವರೂಪದ ಬಗ್ಗೆ ಇರುತ್ತದೆ.ಇಲ್ಲಿ ಹಲವು ಪಾತ್ರಗಳು ಬಂದು ಹೋದರು ಅಜ್ಜ್ಜಿ ಮತ್ತು ಮೊಮ್ಮಗನ ಪಾತ್ರಗಳು ಮುಖ್ಯವಾದವು ತಂತಮ್ಮ ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನರ ಕಥೆಯೂ ಇಲ್ಲಿದೆ. ಅದರಿಂದಾಗಿ ಇಂದಿನ ನಮಗೆ ಕೇಳಿಸದೇ ಹೋದ ಕೆಲವು ಯಾತನೆಯ ಧ್ವನಿಗಳನ್ನು ಲೇಖಕರು ಬಹಳ ಸೊಗಸಾಗಿ ಪುಟಗಳ ಮೇಲೆ ತಂದಿದ್ದಾರೆ. 

ಡಾ. ಕೆ. ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ-ಮೂಕಜ್ಜಿಯ ಕನಸುಗಳು. ವೈಚಾರಿಕತೆ ಮತ್ತು ಮಾನವೀಯತೆಯ ಸಮನ್ವಯವನ್ನು ಕಥಾನಾಯಕಿ ಮೂಕಜ್ಜಿ ಸಾರುತ್ತಾಳೆ. ಭಾರತೀಯ ಧರ್ಮಶಾಸ್ತ್ರದಲ್ಲಿ ಪ್ರಾಚೀನ ಕಾಲದ ಋಷಿಮುನಿಗಳು ಅಂತರ್‌ ದೃಷ್ಟಿಯುಳ್ಳವರಾಗಿದ್ದರು ಎಂಬ ವಿಷಯವನ್ನು ದೇವರು, ಧರ್ಮದಲ್ಲಿ ವಿಶ್ವಾಸ ಇರುವ ಎಲ್ಲರೂ ಇಂದಿಗೂ ನಂಬುತ್ತಾರೆ. ಅದನ್ನೇ ಇಂದಿನ ವಿಜ್ಞಾನ 'ಅತೀಂದ್ರಿಯ ಜ್ಞಾನ' ಎಂಬ ಹೆಸರಿನಿಂದ ಕರೆದು, ಅದರ ಅಸ್ತಿತ್ವದ ಕುರಿತು ಪುರಾವೆಗಳನ್ನು ಕಲೆಹಾಕಲು ಪ್ರಯತ್ನಿಸಿದೆ.ಹಿಂದೂ ಧರ್ಮದ ಬೆಳವಣಿಗೆಯ ಇತಿಹಾಸವನ್ನು ಬಿಚ್ಚಿತೋರಿಸಿ, ವೈದಿಕ ಯುಗದಿಂದ ತೊಡಗಿ, ಅದರ ನಂತರ ಹಿಂದೂ ಧರ್ಮದಲ್ಲಿ ನಡೆದ ಹಲವಾರು ಪರಿವರ್ತನೆಗಳ ದೆಸೆಯಿಂದ ಹುಟ್ಟಿಕೊಂಡ ವಿವಿಧ ಮತ, ಧರ್ಮ, ಪಂಥ, ದೇವರುಗಳ ಪುರಾಣಗಳನ್ನೆಲ್ಲಾ ಕಾದಂಬರಿಕಾರರು ಮೂಕಜ್ಜಿಯ ಅತೀಂದ್ರಿಯ ಜ್ಞಾನದ ಮೂಲಕ ಬಿತ್ತರಿಸುತ್ತಾರೆ. ಮನುಷ್ಯ ತನ್ನ ಕಲ್ಪನೆಗಳಿಂದ ಸೃಷ್ಟಿಸಿದ ದೇವರು, ಕಾಲ ಕಾಲಕ್ಕೆ ಬದಲಾದ ಇತಿಹಾಸ ಈ ಕಾದಂಬರಿಯಲ್ಲಿ ಬಿಚ್ಚಿಕೊಳ್ಳುತ್ತದೆ. ಕುಲ, ಗೋತ್ರ, ಬಳಿ, ರೀತಿ, ರಿವಾಜು, ಅನಾದಿ ಕಾಲದ ಜನರ ಮುಗ್ದ ಲೈಂಗಿಕ ಕ್ರಿಯೆ, ತನ್ಮೂಲಕ ಲಿಂಗ-ಯೋಜನಿಗಳ ಸಂಕೇತ ಎನಿಸಿದ ಶಿವ-ಮಾತೃದೇವತೆಯ ಆರಾಧನೆ ಹುಟ್ಟಿಕೊಂಡ ಹಿನ್ನೆಲೆಗಳನ್ನೆಲ್ಲ ಮೂಕಜ್ಜಿಯು ತನ್ನ ಪ್ರಖರವಾದ ವೈಚಾರಿಕ ತರ್ಕ ಸರಣಿಗಳ ಮೂಲಕ ವಿವರಿಸುತ್ತಾಳೆ.  .  ಒಂದು ಕಾಲದಲ್ಲಿ ವಿಶೇಷ ಪೂಜೆ, ಆರಾಧನೆಗಳಿಗೆ ಒಳಗಾಗಿದ್ದ ದೇವರುಗಳು ಕಾಲಕ್ರಮೇಣ ಭಕ್ತರ ಮರವೆಯ ಉಗ್ರಾಣದ ಮೂಲೆ ಹಿಡಿದು, ಅವರ ಸ್ಥಾನದಲ್ಲಿ ಹೊಸ ಹೊಸ ದೇವರುಗಳು ಸೃಷ್ಟಿಗೊಂಡ ಕತೆಯನ್ನು ಮೂಕಜ್ಜಿ ಯಾವ ಮುಲಾಜೂ ಇಲ್ಲದೆ ಬಯಲಿಗೆಳೆಯುತ್ತಾಳೆ. ನಾಲೈದು ಸಾವಿರ ವರ್ಷಗಳಿಂದ ನಡೆದು ಬಂದ ಹಿಂದೂ ಧರ್ಮ, ಸಂಸ್ಕೃತಿ ಹಾಗೂ ಅದರಿಂದಾಗಿ ಹುಟ್ಟಿಕೊಂಡ ಸಮಸ್ಯೆಗಳ ಮಂಥನವನ್ನು ಮೂಕಜ್ಜಿ ತನ್ನ ಕನಸುಗಳೆಂಬ ಅತೀಂದ್ರಿಯ ಜ್ಞಾನದ ಮೂಲಕ ತೆರೆದಿಡುತ್ತಾಳೆ.

 ಮನುಷ್ಯರು ಸೃಷ್ಟಿಸಿದ ದೇವರುಗಳಿಗೇ ತಂತಮ್ಮ ಹೆಂಡಂದಿರಿಂದ ಮುಕ್ತಿ ಇಲ್ಲದಿರುವಾಗ ಸಂಸಾರದಿಂದ ವಿಮುಖನಾಗಬಯಸುವುದು ಹಾಸ್ಯಾಸ್ಪದ. ಅವಳ ಪ್ರಕಾರ, ಗಂಡು-ಹೆಣ್ಣಗಳ ಮೋಹ ಅವರರವರು ಮಾಡಿಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ಸೃಷ್ಟಿಯೇ ಜೀವಿಗಳೊಳಗೆ ತುಂಬಿಸಿಟ್ಟ ಪ್ರೇರಣೆ ಎಂಬಂತಹ ವಿಚಾರಗಳನ್ನು ಹೇಳಿ ಮೂಕಜ್ಜಿ ಕೇಳುಗರಲ್ಲಿ ಅಚ್ಚರಿ ಮೂಡಿಸುತ್ತಾಳೆ. ಇದೇ ಈ ಕಾದಂಬರಿಯ ಕುತೂಹಲವೂ, ವೈಜ್ಞಾನಿಕವಾಗಿ ಸವಾಲು ಆಗುತ್ತದೆ.  ವೈಚಾರಿಕತೆ ಹಾಗೂ ಮಾನವೀಯತೆಯ ಸಮನ್ವಯದ ಕಥೆ ಇದು.

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು / Mookajji's dreams are dr. Sivarama Karanth

ಚಿತ್ರ ಕೃಪೆ : bookbrahma.com

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1968ರಲ್ಲಿ (ಪುಟ: 290) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು / Mookajji's dreams are dr. Sivarama Karanth

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ