Karnataka and Central Government Services

ನಿಮ್ಮ ಸೇವೆಯೆ ನಮಗೆ ಆಧ್ಯತೆ

ಸರ್ಕಾರಿ ಸೇವಾ ಕೇಂದ್ರ

ಅಂತ್ಯಕ್ರಿಯೆ ವೆಚ್ಚ ಮತ್ತು ಜೀವನ ನಿರ್ವಹಣೆಗೆ ನೀಡುವ ಸಹಾಯ ಧನ

 

ಅಂತ್ಯಕ್ರಿಯೆ ವೆಚ್ಚ ಮತ್ತು ಜೀವನ ನಿರ್ವಹಣೆಗೆ ನೀಡುವ ಸಹಾಯ ಧನ

 ನಿಯಮ 44:-ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಾಗು ಅನುಗ್ರಹ ರಾಶಿ ನೀಡುವ ಸಹಾಯಧನ.

ಅಂತ್ಯಕ್ರಿಯೆ ವೆಚ್ಚ ಮತ್ತು ಜೀವನ ನಿರ್ವಹಣೆಗೆ ನೀಡುವ ಸಹಾಯ ಧನ


ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಮರಣಕ್ಕೀಡಾದಾಗ ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ರೂ.4000/-ಗಳನ್ನು ಹಾಗೂ ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿಯೆಂದು ರೂ.71,000/- ಗಳನ್ನು (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಶಾಸನಬದ್ಧ ನಾಮನಿರ್ದೇಶಿತನಿಗೆ ಮಂಜೂರು ಮಾಡುವುದು. ನೋಂದಾಯಿತ ಕಟ್ಟಡ ಕಾರ್ಮಿಕನ ನಾಮನಿರ್ದೇಶಿತನು ಮರಣ ಪ್ರಮಾಣಪತ್ರ ಹಾಗೂ ಮೂಲ ಗುರುತಿನ ಚೀಟಿಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಪೂರಕ ದಾಖಲಾತಿಗಳು:


ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ, ಫಲಾನುಭವಿ ಮರಣ ಹೊಂದಿದ ಸಂದರ್ಭದಲ್ಲಿ ಫಲಾನುಭವಿಯ ನಾಮನಿರ್ದೇಶಿತರ (ನಾಮಿನಿ) ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ ನೀಡತಕ್ಕದ್ದು, ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಮರಣ ಪ್ರಮಾಣಪತ್ರ ನೀಡತಕ್ಕದ್ದು, ರೇಷನ್ ಕಾರ್ಡ್ ನೀಡತಕ್ಕದ್ದು, ಆಧಾರ್ ಕಾರ್ಡ್ ನೀಡತಕ್ಕದ್ದು, ಉದ್ಯೋಗದ ದೃಢೀಕರಣ ಪತ್ರ ನೀಡತಕ್ಕದ್ದು, ನಾಮನಿರ್ದೇಶಿತರ (ನಾಮಿನಿ) ಭಾವಚಿತ್ರವಿರುವ ಗುರುತು ಚೀಟಿಯ (ಯಾವುದಾದರೊಂದು) ಛಾಯಾಪ್ರತಿ ನೀಡತಕ್ಕದ್ದು, ಫಲಾನುಭವಿ ಮರಣವಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿವುದು, ,